ನಮಸ್ಕಾರ!
ಮೊದಲ ಮಾತೇನಂದರೆ - ಈ ಮಕ್ಮಳಿಗೆ ನಮ್ಮ ಕಡೆಯಿಂದ ಕನ್ನಡ ಹೇಳಿಕೊಡುವುದಕ್ಕೆ ನಂಬಿಕೆ ಮತ್ತು ಅಭಿಮಾನವಿಟ್ಟು ನಿಮ್ಮ ಮಕ್ಕಳನ್ನ ಕಳುಹಿಸಿ ಕೊಟ್ಟಿದ್ದಕ್ಕೆ ತಾಯಿ ತಂದೆಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳು! ಮತ್ತು ನೀವು teachersಗೆ ಪ್ರೀತಿಯಿಂದ ಕೊಟ್ಟ ಕಾಣಿಕೆಗಳಿಗೂ ಧನ್ಯವಾದಗಳು. ತಮ್ಮ ಕುಶಲತೆಯಿಂದ ತಯಾರಿಸಿ, ರುಚಿಯಾದ 'ಕನ್ನಡ ಕಲಿ' cake ಮಾಡಿ ಎಲ್ಲರಿಗೂ ತಿನಿಸಿದ್ದಕ್ಕೆ ಪ್ರಕಾಶ್ ಅವರಿಗೆ ಬಹಳ ಬಹಳ thanks!
ಭಾರತಿ ಮತ್ತು ಮಲ್ಲಿಕ್ ಅವರಿಗೆ ನಮ್ಮನ್ನೆಲ್ಲ ಸ್ವಾಗತಿಸಿ. ತಿಂಡಿ, ಟೀ, ಕಾಫಿ supply ಮಾಡಿದ್ದಕ್ಕೆ ಅವರಿಗೂ ಬಹಳ thanks!
ಹೋದ ಶನಿವಾರ ನಮ್ಮ ಶಾಲೆಯ ೨೦೧೫-೨೦೧೬ ನೆ ಸಾಲಿನ ಕೊನೆಯ ದಿನ. ಪ್ರಾಧ್ಯಾಪಕರು(appropriate Kannada word, eh?) ಮೊದಲು ತಾವು ಏನೇನು ಪಾಠಗಳನ್ನ ಮಾಡಿದರು ಅಂತ ಹೇಳಿಕೊಂಡರು. ದೊಡ್ಡ ಮಕ್ಕಳ ಕನ್ನಡದಲ್ಲಿ ಮಾಡಿದ ಚಿಕ್ಕ ಭಾಷಣಗಳನ್ನ ಕೇಳಿ ಸಂತೋಷವಾಯಿತು. I was amazed at these kids the way they spoke and told us all what they learned. The way Amogh brings in sports somehow into his speech, Diya's fluency in her speech, Suhaas addressing each bullet point that I had asked him to talk, Manasa's perfect pronunciation and fluency, Nidhi's vocabulary, Raghav's honest statements about Kannada classes, and last but not the least, Vikram's sincere acknowledgement that he did not learn much but still wants to continue coming to the class - these things make the life of teacher worthwhile! Even the smaller kids were not hesitant to talk in Kannada in front of so many people!
ನಿಮಗೆಲ್ಲ ತಿಳಿದಿರೋ ಹಾಗೆ, ಒಂದು ನೂತನ ಭಾಷೆ ಕಲಿಯಬೇಕಾದರೆ ಮೊದಲು ಆ ಭಾಷೆಯ ಪದಗಳನ್ನು ಕೇಳಿಸಿಕೊಳ್ಳಬೇಕು. ನಂತರ ಮಾತನಾಡಲು ಯತ್ನಿಸಬೇಕು. ತದನಂತರ ಓದುವುದು ಮತ್ತು ಬರೆಯುವುದು. ಈ ವಿಧಾನವನ್ನೆ ನಾವು ಅನುಸರಿಸಲು ಪ್ರಯತ್ನ ಮಾಡಿದೆವು. ಮಕ್ಕಳಿಗೆ ಉಚ್ಚಾರಣೆ, ವ್ಯಾಕರಣ, ಮತ್ತು ಶಬ್ದಕೋಶ - ಇವುಗಳನ್ನು ಧ್ಯೇಯವಾಗಿಟ್ಟುಕೊಂಡು ಬೇರೆ ಬೇರೆ ವಿಧಾನಗಳಲ್ಲಿ ಹೇಳಿಕೊಟ್ಟೆವು. ಉದಾಹರಣೆಗೆ, ಹೋದ ವಾರ ತಿಳಿಸಿದಹಾಗೆ, ವಿಧ ವಿಧ ಹಣ್ಣುಗಳ ನಾಮಪದಗಳನ್ನು ಶ್ರೀಕಾಂತ್ ಅವರು 'ಹಣ್ಣು ಮಾರುವವನ ಹಾಡು' ಎಂಬ ಪದ್ಯದ ಮೂಲಕದಿಂದ ಹೇಳಿಕೊಟ್ಟರು. ಆಟಗಳ ಮೂಲಕ ಸಹ ಇವುಗಳನ್ನ ತಿಳಿಸಲು ಪ್ರಯತ್ನ ಪಟ್ಟೆವು. Jeopardy Game ಮೂಲಕ ವ್ಯಾಕರಣ, ಉಚ್ಚಾರಣೆಯನ್ನೂ, 'ರಾಮ ಕೃಷ್ಣ ' ಆಟದ ಮೂಲಕ ಸಂಖ್ಯೆಗಳನ್ನೂ, 'ಪದ ಬಂಧ' ದ ಮೂಲಕ ಪದಗಳನ್ನೂ ತಿಳಿಸಿಕೊಟ್ಟೆವು. 'ಕಣ್ಣಾ ಮುಚ್ಚಾಲೆ' ಆಟ ಆಡಿ ದಿಕ್ಕುಗಳನ್ನು ಕಲಿತೆವು. ಕತೆಗಳ ಮೂಲಕ ಚಿಕ್ಕ ಚಿಕ್ಕ ಪದಗಳನ್ನು ಓದುವದನ್ನು ತಿಲಿಸಿಕೊಟ್ಟೆವು. ಸಿಂಚನ ಆಚರಿಸಿದ 'ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ' ಸಂದರ್ಭದಲ್ಲಿ 'ಕರ್ನಾಟಕ ದರ್ಶನ' ಎಂಬ ಒಂದು ಕಿರು ನಾಟಕವಾಡಿ ರಾಜ್ಯದ ಬೇರೆ ಬೇರೆ ಪ್ರದೇಶಗಳ ಪ್ರಾಮುಖ್ಯತೆಯನ್ನು ಈ ಮಕ್ಕಳು ಬಹಳ ಚೆನ್ನಾಗಿ ಪ್ರದರ್ಶಿಸಿದರು.
ಚಿಕ್ಕ ಮಕ್ಕಳಿಗೆ ತಮ್ಮ ಹೆಸರು, ತಾಯಿ ಮತ್ತು ತಂದೆಯ ಹೆಸರು, ಮನೆಗೆ ಬಂದವರನ್ನು ಹೇಗೆ ಸ್ವಾಗತಿಸಬೇಕು ಎಂಬುದನ್ನು ಸಂಭಾಷಣೆ ರೂಪದಲ್ಲಿ ಹೇಳಿಕೊಟ್ಟೆವು. ಅಕ್ಷರಗಳನ್ನು ಗುರಿತಿಸುವುದು, ಸರಳ ಪದಗಳ ಅಕ್ಷರಗಳನ್ನು ಜೋಡಿಸಿ ಓದುವುದು, ಹಣ್ಣು , ತರಕಾರಿ, ಬಣ್ಣಗಳನ್ನು ಗುರುತಿಸುವುದು, ಹೀಗೆ ಬಹಳಷ್ಟು ಪದಗಳನ್ನು ಕಲಿತರು. ಎಡಗಡೆ/ಬಲಗಡೆ,ಮುಂದೆ/ಹಿಂದೆ, ಅಲ್ಲಿ/ಇಲ್ಲಿ, ಇತ್ಯಾದಿ ಪರಿಕಲ್ಪನೆಗಳನ್ನು ತಿಳಿಸಿದೆವು. 'ನದಿ-ದಡ' ಆಟವನ್ನಂತೂ ಬಹಳ ಇಷ್ಟ ಪಟ್ಟು ಬೇಜಾರಿಲ್ಲದೆ ಪ್ರಾಯಶಃ ಪ್ರತಿಸಲವೂ ಆಡಿದರು.
ಈಗ ಮುಂದಿನ ವರ್ಷದ ಬಗ್ಗೆ ಸ್ವಲ್ಪ ಮಾತಾಡೋಣ. ಈ ಸಲ ಯಾವುದಾದರೂ textbook ಅನ್ನುಮೂಲವಾಗಿಟ್ಟುಕೊಂಡು ಅದನ್ನೇ ಅನುಸರಿಸೋಣವೆಂದು ಅಂದುಕೊಂಡಿದ್ದೇವೆ. ಈ ಬರುವ ಬೇಸಿಗೆ ದಿನಗಳಲ್ಲಿ ನಾವು ನಾಲ್ಕು ಜನರೂ - ಅಂದರೆ ಶ್ರೀಕಾಂತ್, ಮಲ್ಲಿಕ್, ಮತ್ತು ಮೀನಾ - ಮುಂದಿನ ವರ್ಷದ lesson plan ಮಾಡೋಣವೆಂದುಕೊಂಡಿದ್ದೇವೆ. ಹಾಗೆಯೇ, ಈ ಮಕ್ಕಳಿಗೆ ಕನ್ನಡ ಮರೆಯಬಾರದೆಂದು ಒಂದು ಕಥೆಯೋ, ಪದ್ಯವೋ, ಸುದ್ದಿ ಸಮಾಚಾರವೋ, ಅಂತೂ ಏನೋ ಒಂದು ವಾರಕ್ಕೊಂದಂತೆ ಬರೆದು ಕಳಿಸೋಣವೆನ್ದುಕೊಂಡಿದ್ದೇನೆ. ನೋಡುವಾ, ಇದು ಹೇಗೆ ಆಗತ್ತೆ ಅಂತ!
'ಹೇಳಿದ್ದೆ ಹೇಳೋ ಕಿಸಬಾಯಿದಾಸ' ಅನ್ನೋ ತರಹ ಇವನೇನಪ್ಪ ತಿರುಗ ಹೇಳ್ತಾನೆ ಇವನು ಅಂತ ಬೇಜಾರು ಮಾಡ್ಕೋ ಬೇಡಿ! ಏನಪ್ಪಾ ಅಂದ್ರೆ, ಅದೇ ಮಕ್ಕಳ ಜೊತೆ ಅಪ್ಪ ಅಮ್ಮಂದಿರು ಕನ್ನಡದಲ್ಲಿ ಮಾತಾಡೋದು. ಈ ಬೇಸಿಗೆ ರಜದಲ್ಲಿ ದಯವಿಟ್ಟು enforce ಮಾಡಿ.
ಒಂದು ವಿಷಯ ಹೇಳೋದು ಮರೆತುಬಿಟ್ಟೆ. ನಮ್ಮ ಚಿಕ್ಕ ಮಕ್ಕಳ ಗುಂಪಿನಿಂದ ದಿಶ ಷಣ್ಮುಗಪ್ಪ ಮೇಸನ್ ಬಿಟ್ಟು ಪುನಃ Boston ಗೆ ತೆರಳಲಿದ್ದಾರೆ. ಅವಳಿಗೆ, ಕುಮಾರ್ ಅವರಿಗೆ, ಸ್ಮಿತಾ ಅವರಿಗೆ, ಹಾಗು ದಿಶಾ ತಮ್ಮ ಸನತ್ ಗೆ ನಮ್ಮ ಕಡೆಯಿಂದ ವಿದಾಯ ಹೇಳುವ. ಬೇಕಾದಷ್ಟು ಕನ್ನಡ ಪುಸ್ತಕಗಳನ್ನ ದಾನ ಮಾಡಿದ ನಾಗಾನಂದ್ ಮತ್ತು ಲಕ್ಷ್ಮಿ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ಅವರಿಗೂ ಸಹ ವಿದಾಯ ಹೇಳುವ.
ಇವತ್ತಿಗೆ ಇಷ್ಟು ಸಾಕಲ್ವೆ? ನೋಡೋಣ ಮುಂದಿನ ಸಲ.
Have a wonderful summer!



